Welcome, Guest   [ Register | Sign In | Take a tour | Adult Filter: On ]

ಮೊದಲು ಕನ್ನಡಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ..

ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದದ ಸಂಗತಿ. ಪ್ರತಿಮೆಯ ಸ್ಥಾಪನೆಯ ಸ್ಥಳ, ಮತ್ತಿತ್ತರ ವಿಷಯಗಳು ಏನೇ ಇರಲಿ ಕೇವಲ ಪ್ರತಿಮೆಯ ಸ್ಥಾಪನೆ ವಿಷಯದಲ್ಲಿ ಹುಳುಕನ್ನು ಹುಡುಕುವುದನ್ನು ಸಂಘಟನೆಗಳು ಬಿಡಬೇಕು. ಏಕೆಂದರೆ ಇನ್ನಿತರ ಹಲವಾರು ವಿಷಯಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇದೆ. ಮೂಲಭೂತ ವಿಷಯಗಳಲ್ಲೇ ಕನ್ನಡಿಗರು ಕನ್ನಡವನ್ನೇ ಮರೆಯುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡತನ ಮಾಯವಾಗುತ್ತಿದೆ. ಇವುಗಳು ಬಗ್ಗೆ ಜಾಗೃತಿ ಮೂಡಿಸಬೇಕಾದದ್ದು ಈಗಿನ ಪ್ರಮುಖ ಕಾರ್ಯವಾಗಿದೆ.

ಇದಕ್ಕಿಂತ ಮೊದಲು ಕನ್ನಡವನ್ನು ಉಳಿಸಿ, ಬೆಳೆಸಲು ಮಾಡಬೇಕಾದ ಕಾರ್ಯಗಳು ಸಾಕಷ್ಟಿವೆ. ಮೂಲಭೂತವಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಪ್ರಯತ್ನಗಳತ್ತ ಸಂಘಟನೆಗಳು ಗಮನಹರಿಸದೇ ಇಂತಹ ವಿಷಯಗಳಲ್ಲಿ ಮೊಂಡಾಟ ಮಾಡುತ್ತಿರುವುದು ವಿಷಾದನೀಯ.
1. ಮೊದಲು ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಉಗ್ರ ಹೋರಾಟ ನಡೆಸುವುದು.
2. ಈ ಮೇಲಿನ ಕ್ರಮದಿಂದ ಕನ್ನಡಗರಿಗೆ ನ್ಯಾಯಬದ್ಧವಾಗಿ ಉದ್ಯೋಗ ದೊರೆಯುವುದಲ್ಲದೇ, ವಲಸಿಗರಿಂದ ತತ್ತರಿಸಿರುವ ಬೆಂಗಳೂರಿಗೆ ಮುಕ್ತಿ ದೊರಕಿಸುತ್ತದೆ.
3. ರೇಲ್ವೆ ಹಾಗೂ ಇತರ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸಂಪೂರ್ಣವಾಗಿ ತಪ್ಪಿಸುವ ಬಗ್ಗೆ ನಿರಂತರ ಹೋರಾಟ.
4. ಕನ್ನಡದಲ್ಲೇ ಫಲಕಗಳು, ಜಾಹೀರಾತು ಫಲಕಗಳು ಇರುವಂತೆ ನೋಡಿಕೊಳ್ಳುವುದು.
5. ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕನ್ನಡಕ್ಕೇ ಹೆಚ್ಚು ಪ್ರಾಧಾನ್ಯತೆ ದೊರೆಯುವಂತೆ ಕಟ್ಟೆಚ್ಚರ ವಹಿಸುವುದು. ಈ ಬಗ್ಗೆ ಆಗಾಗ ಕೂಗು ಹಾಕಿ ಸುಮ್ಮನಾಗುವ ಸಂಘಟನೆಗಳು ಪ್ರಬಲವಾಗಿ ಹೋರಾಟ ಏಕೆ ಮಾಡುತ್ತಿಲ್ಲ?
6. ಗಡಿ ಭಾಗಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ನಿರಂತರ ಕಾರ್ಯಗಳು.
7. ಈಗಾಗಲೇ ಮುಖ್ಯಮಂತ್ರಿ ಚಂದ್ರು ಅವರ ಸಮರ್ಥ ಅಧ್ಯಕ್ಷತೆಯಲ್ಲಿ ಸಕ್ರಿಯವಾಗಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರದೊಂದಿಗೆ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳಲ್ಲಿ ಕೈಜೋಡಿಸುವುದು. ಇದು ಪ್ರಾಧಿಕಾರ ಕೈಗೊಳ್ಳುವ ಕ್ರಮಕ್ಕೆ ಇನ್ನಷ್ಟು ಬಲ ಮೂಡಿಸುತ್ತದೆ.

ಇಂತಹ ಇತರ ಹತ್ತು ಹಲವಾರು ಪ್ರಮುಖಕಾರ್ಯಗಳು ಮೂಲೆಗುಂಪಾಗಿರುವಾಗ, ಕೇವಲ ಪ್ರತಿಮೆ ಸ್ಥಾಪನೆಯ ವಿಚಾರದಲ್ಲಿ ಮೊಂಡಾಟ ಮಾಡುತ್ತಿರುವ ಕನ್ನಡ ಸಂಘಟನೆಗಳಿಗೆ ಶೋಭೆಯಲ್ಲ. ಹೆಚ್ಚಿನದಾಗಿ ನಾಡಿನ ಹಿರಿಯ ಸಾಹಿತಿಗಳು, ಮುಖಂಡರುಗಳು ಈ ಪ್ರಯತ್ನಕ್ಕೆ ಬೆಂಬಲ ನೀಡಿರುವಾಗ ಕನ್ನಡ ಸಂಘಟನೆಗಳು ಈ ವಿಷಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದು ಒಳ್ಳೆಯ ಲಕ್ಷಣವಲ್ಲ.

ಪ್ರತಿಸ್ಪಂದನಗಳು

Re: ಮೊದಲು ಕನ್ನಡಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ..
ನೀವು ಹೇಳ್ತಾ ಇರೋ ಎಲ್ಲಾ ಕೆಲಸಗಳನ್ನೂ ಕರವೇ ಮಾಡ್ತಾ ಇದೆ ಸ್ವಾಮ.ಿ
Re: ಮೊದಲು ಕನ್ನಡಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ..
ಪ್ರಚಾರಕ್ಕೋಸ್ಕರ ಕೆಲಸ ಮಾಡಿದರೆ ಸಾಲದು ಸ್ವಾಮಿ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಖಾತ್ರಿಯ ಬಗ್ಗೆ ಕರವೇ ಎಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ? ಟಿವಿ, ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಮುಖ ತೋರಿಸಿದರೆ ಸಾಲದು. ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ.
Re: ಮೊದಲು ಕನ್ನಡಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ..
ಈ ಪ್ರತಿಮೆ ಪ್ರತಿಷ್ಠಾಪನೆಯ ವಿಷಯದಲ್ಲಿ ಹೋರಾಡುವ ಬದಲು ಈ ಕನ್ನಡಪರ ಸಂಘಟನೆಗಳು ನೀವು ಹೇಳಿರುವ ಕಾರ್ಯಗಳನ್ನು ಪಾಲಿಸಿದರೆ ಸ್ವಲ್ಪವಾದರೂ ಉಪಯೋಗವಾಗಬಹುದು. ನೀವು ಹೇಳಿರುವ ಪಟ್ಟಿಗೆ ನನ್ನದೂ ಒಂದು ಸೇರ್ಪಡೆ ನಿಕ್ಕಿಯವರೇ... ಬೆಂಗಳೂರಿನಲ್ಲಿ ಕನಿಷ್ಟ ಪಕ್ಷ ಕನ್ನಡಿಗರಾದರೂ ಕನ್ನಡ ಮಾತನಾಡುವುದು... :-(
Re: ಮೊದಲು ಕನ್ನಡಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ..
ellru heltaare......kannada nirabimaanigala gudu...kannada da horaata karnaataka rakshana vedike onde madbekilla ?nivu nim dina nithyadalli kannada eshtu balastira ?hogenakal anyaaya....munde bengaluru kai tappidaru aaglu naarayana gowdru -pravin shetty-vaatal ivre horaata badbeku nivu maatra araamaagi maneli kutu T.V. Nodi
Re: ಮೊದಲು ಕನ್ನಡಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ..
ಮಾನ್ಯ ಅನಾಮಧೇಯರೇ, ಅಪಾರ್ಥ ಕಲ್ಪಿಸಬೇಡಿ. ಕನ್ನಡಿಗರಾಗಿ ನಮ್ಮ ಜವಾಬ್ದಾರಿಯೂ ಸಾಕಷ್ಟಿದೆ, ಇದು ನನ್ನ ಈ ಹಿಂದಿನ ಲೇಖನದಲ್ಲೇ ತಿಳಿಸಿದ್ದೇನೆ. ನಾರಾಯಣ ಗೌಡರು ಮತ್ತು ವಾಟಾಳ್ ನಾಗರಾಜ್ ಅವರಂತವರು ಕನ್ನಡ ಪರವಾದ ಮುಂಚೂಣಿ ಹೋರಾಟಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹೋರಾಟಕ್ಕೂ ಅರ್ಥ ಬೇಕು. ಈ ಲೇಖನದಲ್ಲಿ ತಿರುವಳ್ಳುವರ್ ಪ್ರತಿಮೆಗೆ ಸಂಬಂಧಿಸಿದಂತೆ ಮಾಡಿದ ಹೋರಾಟ ಅಷ್ಟು ಅರ್ಥಪೂರ್ಣವಾಗಿರಲಿಲ್ಲ ಎನ್ನುವುದನ್ನು ಮಾತ್ರ ಹೇಳಲಾಗಿದೆ. ಇನ್ನುಳಿದಂತೆ ಕನ್ನಡದ ನಾಡು, ನುಡಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಾದ ಕೆಲಸ ಸಾಕಷ್ಟಿದೆ.
Re: ಮೊದಲು ಕನ್ನಡಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ..
ಕರವೇ ಪ್ರತಿಮೆಯನ್ನು ಏತಕ್ಕೆ ವಿರೋಧಿಸಿದರು ಅಂತ ಇಲ್ಲಿ ಓದಿ. http://www.karnatakarakshanavedike.org/modes/view/114/tiruvalluvar-pratime-sthapane-karave-niluvu.html ನಾರಾಯಣ ಗೌಡರು ಅವಾಗಾವಾಗ ಕೆ ಎಸ್ ನ ಪದ್ಯವೊಂದನ್ನು ಹೇಳುತ್ತಿರುತ್ತಾರೆ. ಅದು ಹೀಗಿದೆ. ಚಿಗುರ ಚಿನ್ನದ ನಡುವೆ ಹೂವ ಬಯಸುವರು ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ನಿಂತರೆ ಕೇಳುವರು ನೀನೇಕೆ ನಿಂತೆ ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಓದಿದರೆ ಹೇಳುವರು ಮತ್ತೊಮ್ಮೆ ಬರೆಯೊ ಬರೆದಿಡಲು ಬೆದಕುವರು ಬರವಣಿಗೆ ಸರಿಯೋ ಇವರ ಬಯಕೆಗಳೇನೋ ಇವರದೇ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಹಕ್ಕು ನಿರಾಕರಣೆ